ಕರಾರಾದಲ್ಲಿ ಕವಿ

ಅಡುಗೆ ಮನೆಯಲ್ಲಿ ಒಗ್ಗರಣೆಯ ಸದ್ದು
ಕುಂಟೆಬಿಲ್ಲೆಯ ಆಟ ಹೊರಗೆ
ಮೇಜಿನ ಮೇಲೆ ಲೇಖನಿ ಹಿಡಿದ ಕವಿ-
ಗಣೇಶ ಹೊರಟಿದೆ ಮೆರವಣಿಗೆ

ಬೆಳಗಿನಿಂದಲೂ ಹೀಗೆಯೇ–
ಪದಗಳ ನಿರೀಕ್ಷೆಯಲಿ ಪದಗಳು
ಎಲ್ಲರೂ ನಿದ್ರಿಸಿದಾಗ ಬಂದು ಹಾಗೆಯೇ
ಮರಳುವ ಬೆಳದಿಂಗಳು

ಬರೆಯುವುದಾದರೆ ಬರೆಯಬಹುದು
ಗೊಲ್ಕೊಂಡಾದ ಲಗ್ಗೆ
ಇಲ್ಲ ಅಸ್ಸಾಮದ ಇಲ್ಲ ಪಂಜಾಬದ
ಇಲ್ಲ ಶ್ರೀಲಂಕೆಯ ಬಗ್ಗೆ

ಎಲ್ಲ ವಿಷಯಗಳೂ ಮೂಲದಲ್ಲಿ ಒಂದೇ-
ವ್ಯತ್ಯಾಸವೆಂದರೆ ಶಬ್ಧ
ಈ ವ್ಯತ್ಯಾಸದ ಅರ್ಥವಾಗುವುದರಲ್ಲೆ
ಕಳೆದು ಹೋಗುತ್ತದೆ ಅಬ್ದ

ಆಗುವಿಕೆಯೋ ಅದು ಪ್ರಾರ್ಥನೆಯ ಕರೆ
ವಿಶ್ವಾಸಿಯನ್ನು ತಲುಪುವ ಹಾಗೆ
ಅಥವ ತಿಳಿಯದೇ ಅರಳುವಂತೆ
ಮನೆಯಂಗಳದ ಮೊಗ್ಗೆ

ಈ ಮಧ್ಯೆ ಹಳೆ ಸರಕಾರ ಹೋಗಿ
ಹೊಸ ಸರಕಾರ ಬರುತ್ತದೆ
ನಿಜ– ಕಾಯುವುದಿಲ್ಲ ಯಾರೂ ಕವಿತೆಗೆ
ಕವಿಯೊಬ್ಬನಲ್ಲದೆ

ಹಿಂದೆ ಕಾದಿದ್ದನಂತೆ ಮೈಖೆಲೇಂಜೆಲೊ
ಕರಾರಾದಲ್ಲೆಷ್ಟೊ ತಿಂಗಳು !
ಕಾಣುವತನಕ (ಹಾಗೆಂದು ಕೇಳಿರುವೆ)
ತಾಜಾ ಸಂಗಮರವರಿ ಕಲ್ಲು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮ್ಮ
Next post ದೋಣಿ

ಸಣ್ಣ ಕತೆ

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys